Friday, April 11, 2014

ನಾಗರಹೊಳೆ ಛಾಯಾಚಿತ್ರ ಕಾರ್ಯಾಗಾರ 2014


ಕಾಡು ತನ್ನದೆಯಾದ ನಿಗುಡತೆಯನ್ನು, ರೋಚಕತೆಯನ್ನು ಮಡಿಲಲ್ಲಿ ತುಂಬಿಕೊಂಡಿದೆ.....
 ... ಅದನರಿಯುವ ಮನಸ್ಸು, ಕಣ್ಣು ಮಾತ್ರ ನಮಗೆ ಬೇಕಿದೆ.
ನನ್ನ ಪ್ರಕೃತಿ ಹೊರಗಿನ ಪ್ರಕೃತಿಯ ಜೊತೆಗೆ ಬೆರತಾಗ ನಮ್ಮ ಕಣ್ಣುಮನಕ್ಕೆಅದರ ಅರಿವಾಗುತ್ತದೆ.
ನಮ್ಮೊಳಗಿನ ಶಬ್ದಗಳು ನಿಂತಾಗ ಕಾಡಿನ ನೀಶಬ್ದದಲ್ಲಿನ ಶಬ್ದ.... ಮೌನದಲ್ಲಿನ ಮಾತು ಅರ್ಥವಾಗುತ್ತದೆ.

 ಜಗತ್ತಿನ ಯಾOತ್ರಿಕತೆಯನು ಬಿಟ್ಟು, ಅಜರಾಮರವಾಗಿರುವ ಕಾಡಿನ ಜೀವ ಜಗತ್ತನು ಸವಿಯಲು, ಅದನ್ನು ಕೆಮೆರಾ ಕಣ್ಣಿಂದ ಕ್ಲಿಕ್ಕಿಸಲು  ವಾರಾಂತ್ಯದ ಫೋಟೋಗ್ರಫಿ ಕಾರ್ಯಗರಕ್ಕೆ ಹೋಗಿದ್ದೆವು.
ಬೆಳ್ಳಗೆ 4 ಗಂಟೆಗೆ ಎದ್ದು ಬೆಂಗಳೂರು – ಮೈಸೂರ್- ಹುಣಸೂರು ಮಾರ್ಗವಾಗಿ ನಾಗರಹೊಳೆ ಅಭಯಾರಣ್ಯದ ಚೆಕ್ ಪೋಸ್ಟ್ ತಲುಪಿದೆವು.
ಚೆಕ್ ಪೋಸ್ಟ್ ನಿಂದ ಕಾಡಿನ ಪ್ರವೇಶ. ನಿರ್ಜನ ನಿಶಬ್ದದದ ನಡುವೆ ನಿದಾನವಾಗಿ ಚಲಿಸುತ್ತಿದಾಗ ಜಿಂಕೆಯೊಂದು ಕಾಣಿಸಿ ಪಟ್ಟನೆ ಮಾಯವಾಯಿತು. ನಮ್ಮ ವೇಗದ ಮಿತಿ 20-30 ಕಿಲೋ.ಮೀಟರ್. ಸ್ವಲ್ಪ ದೂರದಲ್ಲೇ ರಸ್ತೆಯ ಬದಿಯಲ್ಲೇ ಆನೆಯೊಂದು ತನ್ನ ಪಾಡಿಗೆ ಹಸಿರು ಮೇಯುತಿತ್ತು. ದಾರಿಯುದಕ್ಕು ಪಕ್ಷಿಗಳ ಚಿಲಿ ಪಿಲಿ ಶಬ್ದ,
ಲಂಗುರ್ ಕೋತಿಗಳ ಆಟ, ಜಿಂಕೆಗಳ ಓಡಾಟ ನೋಡುತ್ತಾ ಅಭಯಾರಣ್ಯದ ನಡುವೆಯಿರುವ ಅರಣ್ಯಧಿಕಾರಿ ಕಛೇರಿಯ ತಲುಪಿದೆವು. ಕಾರ್ಯಾಗಾರಕ್ಕೆ ಬಂದಿದ್ದ ಇತರ ಸ್ನೇಹಿತರನ್ನು ಕೂಡಿಕೊಂಡೆವು.
ಕೆಲವು ಛಾಯಾಗ್ರಾಹಕರು ಆಗ ತಾನೇ ಕೆನ್ನಾಯಿಗಳು (wild dogs) ಕಾಡು ಹಂದಿಯನ್ನು (wild boar) ಬೇಟೆಯಾಡಿದ ದೃಶ್ಯ ಸೆರೆಯಿಡಿಯುತಿದ್ದರು. ಕೆನ್ನಾಯಿಗಳು ತಮ್ಮ ಬೇಟೆಯನ್ನು ಬಿಟ್ಟು ಮರೆಯಲಿ ನಿಂತು ಜನಸಂದಣಿ ಚದುರಲು ಕಾಯುತ್ತಿತು.
ಕಾರ್ಯಾಗಾರದ ಒಂದು ನೋಟ

  • ಕಾರ್ಯಾಗಾರದ ಸಹಭಾಗಿಗಳ ಪರಿಚಯ ಮಾಡಿಕೊಂಡ ಬಳಿಕ, ನಮ್ಮ ಫೋಟೋಗ್ರಫಿಯಲ್ಲಿನ ಆಸಕ್ತಿ ಮತ್ತು ಕಾರ್ಯಗರದಿಂದ ನಮ್ಮ ಅಪೇಕ್ಷೆಯನ್ನು ತಿಳಿದು ಪ್ರಾರಂಭಿಸಲಾಯಿತು.
  • ಮನುರವರು ಫೋಟೋಗ್ರಫಿ ಮತ್ತು ಕೆಮೆರಾದ ಹಿತಿಹಾಸ ಅದು ನಡೆದು ಬೆಳೆದು ಬಂದ ಹಾದಿಯನ್ನು ವಿವರಿಸುತ್ತಾ ಕೆಮೆರಾದ ಭಾಗಗಳನ್ನು ವಿವರಿಸಿದರು.
  • ನಮ್ಮ ಕೆಮೆರಾವನ್ನು ನಮಗೆ ಪರಿಚಯಿಸಿದ ಬಗ್ಗೆ.- ನಮ್ಮ ಕೆಮೆರಾದ ಸದ್ಯತೆ ಮತ್ತು ಅದರ ಕಮ್ಮಿಗಳು,ನಮ್ಮ ಕೆಮೆರಾದ ವಿವಿದ ಗುಂಡಿಗಳು ಮತ್ತು ಅದರ ಉಪಯೋಗಗಳು.
  • ಕೆಮೆರಾದ ಅಪರ್ಚರ್, ಶೆಟ್ಟರ್ ಸ್ಪೀಡ್, ಮತ್ತು ಐ‌ಎಸ್‌ಓ ಗಳ ಸಂಭಂದ ಅದರ ನಿಯಂತ್ರಣ. ಮ್ಯಾನುವಲ್ ಮೋಡ್ ನಲ್ಲಿ ಉಪಗಿಸುವುದು.
  • Exposure Triangle ಮತ್ತು composition ಬಗ್ಗೆ ಗೌರೀಶ್ ಮಾತನ್ನಾಡಿ ಅದರ ಮಾಹಿತಿ ಮತ್ತು ಟಿಪ್ಸ್ ಕೊಟ್ಟರು.
  • ಲೋಕೇಶ್ ರವರು ಕೆಮೆರಾವನ್ನು ವಿವಿದ ಅಪರ್ಚರ್ ಮತ್ತು ಶಟ್ಟರ್ ಸ್ಪೀಡ್ ನಲ್ಲಿ ಬಳಸಿ ಬೆಳಕಿನ ಪ್ರಮಾಣ ಮತ್ತು ಅದರ ಪರಿಣಾಮ ಪ್ರಯೋಗಿಕವಾಗಿ ಮಾಡಿಸಿದರು.
  • Portrait, Landscape ಮತ್ತು wildlife ಫೋಟೋಗ್ರಫಿಯ ಮಾಹಿತಿ ಮತ್ತು ತರಬೇತಿ ನೀಡಲಾಯಿತು.

ಹಾಡಿ ಮಕ್ಕಳೊಂದಿಗೆ ಕೆಲವು ಗಂಟೆಗಳು.....
Add caption


ಮುಂಜಾನೆಯ ಮಂಜಿನಲಿ....




ಬೆಳಕಿನೊಂದಿಗೆ ನೆರಳಿನ ಸಮಾಗಮ ......




ವನ್ಯಜೀವಿಗಳೊಡನೆ ನಮ್ಮ ಸಂಪರ್ಕ .... ಕೆಮೆರಾದ ಮೂಲಕ 












ಕಾಡು ವನ್ಯಜೀವಿಗಳು ಅದರ ಪರಿಸರ ಅದರದೇ ಆದ ಸಾಮರಸ್ಯವನ್ನು ಕಾಪಾಡಿಕೊಂಡಿದೆ... ತಾವು ಜೀವಿಸಿ ಬೇರೆಯವರಿಗೂ ಬದುಕಲು ಅಣಿಮಾಡಿಕೊಟ್ಟಿದೆ.
ಮನುಷನ ದಬ್ಬಾಳಿಕೆ ಸ್ವರ್ಥ ಮತ್ತು ಮನ್ನಣೆಯ ದಾಹ ವನದ ವಿನಾಶದತ್ತ ನಾಂದಿಯಡಿದೆ.
ಕಾಡಿಗೆ ನಾನಾರೀತಿಯಾಗಿ ಲಗ್ಗೆಯಿಡುವ ನಾವು ವನ್ಯಮೃಗಗಳ, ಪಕ್ಷಿ ಕೀಟಗಳ, ವನ್ಯಸಂಪತ್ತನ್ನು ಗೌರವಿಸುವುದು ಮತ್ತು ಅದರ ಇರುವಿಕೆಗೆ ದಕ್ಕೆಬಾರದಂತೆ ನೋಡಿಕೊಳ್ಳುವುದು ಸಹ ನಮ್ಮ ಜವಾಬ್ದಾರಿ.

ಈ ಎರಡು ದಿನ ಪೂರ್ತಿಯಾಗಿ ಖುಷಿಪಟ್ಟು ಹೊಸದನ್ನು ಕಲಿತಿದ್ದೇನೆ, ಸಮಯವನ್ನು ಆನಂದಿಸಿದ್ದೇನೆ. ಸಹಭಾಗಿಗಳ ವಡನಾಟ, ಲೋಕೇಶ್, ಗೌರೀಶ್ ಮತ್ತು ಮನು ರವರ ಮಾರ್ಗದರ್ಶನ ಪ್ರೋತ್ಸಾಹ ಮನ ಮೆಚ್ಚಿವಂತದ್ದು.

Thursday, May 9, 2013

ಚಿತ್ರ ಸಂತೆ 2013

ಚಿತ್ರ ಸಂತೆಯ ಮೆರಗು ಯಕ್ಷಗಾನದ ಬೊಂಬೆಗಳು
ಜನವರಿ 27ನೇ ಭಾನುವಾರ 2013 ಪ್ರತಿ ವರ್ಷದಂತೆ ಈ ಸಲವೂ ಕುಮಾರ ಕೃಪಾ ರಸ್ತೆ  ಚಿತ್ರಕಲೆ ರಸಿಕರ, ಕಲಾವಿದರ ಸಂಗಮಕ್ಕೆ ನಂದಿಯಾಯಿತು. ಚಿತ್ರ ಸಂತೆ ತನ್ನ ಮೆರಗಿನಿಂದ ಬಹಳ ಕಲಾಭಿಮಾನಿಗಳನ್ನು ಒಂದೆಡೆಗೆ ಸೆಳೆದು ಅದರದೇಯಾದ ಗಮ್ಮತ್ತನ್ನು ತೋರ್ಪಡಿಸಿತು. ಚಿತ್ರ ಕಲಾ ಪರಿಷತ್ ಸತತವಾಗಿ 10 ನೇ ವರಷ ಆಯೋಜಿಸಿತ್ತು.

ಕಲೆಗಾರನ ಕುಂಚದ ಕೆಲಸ




ಚಿತ್ರ ಸಂತೆ ವೃತಿ ಕಲಾವಿದರಿಗೆ, ಕಲಾ ವಿಧ್ಯಾರ್ತಿಗಳು ಮತ್ತು ಹವ್ಯಾಸಿ ಚಿತ್ರಕಲಾವಿದರಿಗೆ ತಮ್ಮ ಕ್ರಿಯಾಶೀಲತೆಯ ಪ್ರದರ್ಷನಕೆ ವೇದಿಕೆ ಮಾಡಿಕೊಟ್ಟಿದೆ. ಕಲಾ ರಸಿಕರು ತಮ್ಮ ನೆಚ್ಚಿನ ಕಲಾಕೃತಿಯನ್ನು ನೇರ ಕಲಾವಿದರಿಂದ ಕೊಳುವ ಅವಕಾಶವನ್ನು ಚಿತ್ರಸಂತೆ ನೀಡುತ್ತದೆ.

ಪ್ರತಿ ವರ್ಷ ಜನವರಿಯ ಕೊನೆಯ ಭಾನುವಾರದಂದು ಚಿತ್ರಸಂತೆ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯುತ್ತಾಬಂದಿದೆ.
ಕಣ್ಣು ಮನಸಿಗ್ಗೆ ಮೊದ ನೀಡುವ ಕಲಾಕೃತಿಗಳು, ಕಲಾವಿದನ ಹೂಹೆಗಳು ಬಣ್ಣಗಳಿಂದ ಚಿತ್ರ ರೂಪಗೊಂಡಿರುವದನ್ನು ನೋಡಲು ಹರ್ಷ.
ಐತಿಹಾಸಿಕ ಸ್ಥಳ
  ಕಲಾವಿದರು ತಮ್ಮ ಬಾವನೆಗಳನ್ನು ತರಾವರಿ ಬಣ್ಣಗಳಿಂದ ಹೊರತಂದಿರುವದನ್ನು  ನೋಡಬಹುದು.

ಶಯನಾವಸ್ತೆಯ ಬುದ್ದ   

 ನಮ್ಮ ಸಂಸ್ಕೃತಿ, ಐತಿಹಾಸಿಕ, ಸಾಮಾಜಿಕ ನ್ಯಾಯದ ದ್ವನಿ, ಪ್ರಕೃತಿಯ ನಗು, ವನ್ಯ ಮೃಗಗಳ ಜೀವನ ಎಲವನ್ನ ಸೊಗಸಾಗಿ ಬಿಂಬಿಸಿರುವುದನ್ನು ನೋಡಬಹುದು.

Add caption


ಚಿತ್ರಸಂತೆಯಲ್ಲಿ ಉತ್ತರ ಕರ್ನಾಟಕದ, ನಮ್ಮ ನೆರೆ ರಾಜ್ಯದ ತೆಮಿಳುನಾಡು ಅಂದ್ರ ಪ್ರದೇಶದ ಕಲಾವಿದರು ಬಾಗವಹಿಸಿದ್ದರು.
ಕೆಲವರಿಗೆ ಅದು ಆದಾಯವನ್ನು, ಕೆಲವರಿಗೆ ಮನಸಂತೋಷವನ್ನು ಕೊಡುತ್ತಿತು.



ಸಾಮಾಜಿಕ ನ್ಯಾಯಕ್ಕಾಗಿ ಕದ ತಟ್ಟುತಿರುವುದೆ?



ಚಿತ್ರಸಂತೆಗೆ ಪ್ರತಿ ವರ್ಷದಂತೆ ಈ ವರ್ಷವೂ ನನಗೆ ಮನೋಲಾಸವನ್ನು ಕೋಟಿದಂತೂ ನಿಜ.ನನ್ನ ಕೆಮೆರಾ ಕಣ್ಣಿಗೆ ಸೆರೆಸಿಕ್ಕ ಕೆಲವು ಫೋಟೋಗಳು.
    

Add caption


ಶವಪೆಟ್ಟಿಗೆಯ ಕೂಗು ನನ್ನನು ಉಪಯೋಗೀಸ ಬೇ(ಕ)ಡ........
 



ಕೆಮೆರಾ ಕಣ್ಣಿಗೆ ಕಂಡ ವರ್ಣ ಚಿತ್ರ


ಯಂತ್ರ ಯುಗದ ತಂತ್ರ ...


ಪ್ರಕೃತಿಯ ಉಸಿರಾಟ



Sunday, April 28, 2013

ಕುಂತಿ ಬೆಟ್ಟ ಮತ್ತು ಒನಕೆ ಬೆಟ್ಟದ ಚಾರಣ

 ಕುಂತಿ ಬೆಟ್ಟ ಮತ್ತು ಒನಕೆ ಬೆಟ್ಟದ   ಚಾರಣ
ಕುಂತಿ ಬೆಟ್ಟದ ಶಿಕರದ ತುದಿ


ಸ್ಥಳ: ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯನ್ನು ತಲುಪಿ, ಸುಮಾರು ೧೫ ಕಿಲೋ ಮೀಟರ್ ಚಲಿಸಿದ ನಂತರ ಬಲಕ್ಕೆ ಪಾಂಡುಪುರದ ಮಾರ್ಗ ಫಲಕ ಸಿಕುತ್ತದೆ. ಇದೆ ಮಾರ್ಗವಾಗಿ ಸಾಗಿ ಪಾಂಡವಪುರ ರೈಲ್ವೆ ನಿಲ್ದಾಣವನ್ನು ದಾಟಿ ಮುಂದೆ ಸುಮಾರು ೭- ೮ ಕಿಲೋ ಮೀಟರ್ ಸಾಗಿದ ನಂತರ ಬಲಕ್ಕೆ ತಿರುಗಿ ಸ್ವಲ್ಪ ದೂರಕ್ಕೆ ಕುಂತಿ ಬೆಟ್ಟ ಕಾಣಸಿಗುತ್ತದೆ.

ದೇವಸ್ಥಾನದ ಮೆಟ್ಟಿಲುಗಳು 

ಸುಂದರ ಕೆರೆಯ ತೋಪ್ಪಲಿನ ಮತ್ತು ಹಸಿರು ಸಿರಿಯ ನಡುವೆ ಈ ಬೆಟ್ಟವಿದೆ.
ಬೆಟ್ಟದ ಬುಡ ಬಾಗಕ್ಕೆ ತಲುಪುವ ಮುಂಚೆ ಸುಂದರವಾದ ಹರಳಿ ಮರ ಮತ್ತು ಕೆಂಪು ಬಿಳಿ ಬಣ್ಣದ ಮೆಟ್ಟಲುಗಳು ಸ್ವಾಗತವನ್ನು ಕೋರಿ ಮಲ್ಲಿಕಾರ್ಜುನನ ದೇವಸ್ಥಾನಕ್ಕೆ ಕರೆದೊಯುತ್ತದೆ.

ಏಕ ಶೀಲಾ ಗಣಪ 


ದೊಡ್ಡದಾದ ಏಕಶಿಲೆಯಲ್ಲಿ ಕೆತ್ತಿದ ಗಣೇಶ ನಿಮ್ಮನು ಬರಮಾಡಿಕೊಳುತ್ತಾನೆ. ದೇವಸ್ಥಾನ ಮತ್ತು ಕಲ್ಯಾಣಿಯ ಸುತ್ತ ಕಾಣಸಿಗುವ ಬೆಟ್ಟವೇ ಕುಂತಿ ಬೆಟ್ಟ. ದೇವಸ್ಥಾನದ ಎಡಕ್ಕೆ ಒನಕೆ ಬೆಟ್ಟವಿದೆ ಬಲಕ್ಕೆ ಕುಂತಿ ಬೆಟ್ಟ.
ಮೊದಲು ನಾವು ಕುಂತಿ ಬೆಟ್ಟವನ್ನು ಹತ್ತುವುದೆಂದು ನಿರ್ಣಯಿಸಿ ಅಲ್ಲಿಯ ಸ್ಥಳಿಕನನ್ನು ಜೊತೆಗೂಡಿ ಬೆಟ್ಟ ಹತ್ತಲು ಶುರು ಮಾಡಿದೆವು. ಸ್ವಲ್ಪ ಕಷ್ಟವಾದರು ಸುಮಾರು ಒಂದರಿಂದ ಒಂದೂವರೆ ಗಂಟೆಯಲ್ಲಿ ಕುಂತಿ ಬೆಟ್ಟವನ್ನು ಹತ್ತಬಹುದು.
ಬೆಟ್ಟವನು ಏರುತ್ತ ಎರಡು ಕಡೆಗಳಲ್ಲೂ ವಿವಿಧ ಆಕೃತಿಯ ಶಿಲಾಬಂಡೆಗಳು (ಮೊಸಳೆಯ, ಕರಡಿಯ ಆಕಾರಗಳು) ಮತ್ತು ರಮಣಿಯವಾದ ಪಾಂಡವಪುರದ ಕೆರೆ ಸುತ್ತಲಿನ ಗದ್ದೆ ತೋಟವನ್ನು ಕಾಣಬಹುದು.


ಉಡದ ಆಕಾರದ ಬಂಡೆ

ಪಾಳು ಮಂಟಪ 

ಬೆಟ್ಟದ ತುದಿಯಲ್ಲ್ಲಿ ಗೋಪುರದ ಆಕಾರದ ಮಂಟಪವಿದೆ ಅದರಲ್ಲಿ ಶಿಲೆಯಲ್ಲಿ ಕೆತ್ತಿದ ಪಾದಗಳಿವೆ. ಅದನ್ನು " ಭೀಮನ ಪಾದಗಳು ಅಥವಾ ಭೀಮನ ಹೆಜ್ಜೆಗಳು ಎನ್ನುತ್ತಾರೆ."

ಭೀಮನ ಪಾದಗಳು
ಮಂಟಪದ ಹತ್ಹಿರವೇ ಸಣ್ಣದಾದ ಬಂಡೆಗಳ ಸಂದುವಿನಲ್ಲಿ ನೀರಿನ ಶೇಕರಣೆ ಇದೆ. ಇಲ್ಲಿ ವರ್ಷದ ೩೬೫ ದಿನವು ನಿರಿರುತ್ತದೆಯಂತೆ. ಇದನ್ನು" ಕುಂತಿಯ ಕೊಳ " ಎನುತ್ತಾರೆ.
ಕುಂತಿ ಕೊಳದ ಸ್ವಲ್ಪ ಮುಂದೆ ಬಂಡೆಯ ಒಂದು ಉದ್ದಕೆ ಬಂಡೆಯ ಬಣ್ಣ ಕಪ್ಪು ಮತ್ತು ಬಿಳಿಯಾಗಿ ಕಾಣಸಿಗುತ್ತದೆ ಅದನ್ನು ಕುಂತಿ ಸೀರೆ ಒಣಗಿಸಿದ ಗುರುತು ಅಥವಾ " ಕುಂತಿ ಸೀರೆ" ಎನ್ನುತಾರೆ.

ಕುಂತಿ ಸೀರೆ ಒಣಗಿಸಿದ ಜಾಗ

ಮಂಟಪದ ಹಿಂದೆ ಬಂಡೆಯಲ್ಲಿ ಕೊರಕಲಿದೆ ಅದು ಒಳ್ಳೆಯ ಆಕಾರದಲಿದೆ ಅದನ್ನು " ಭೀಮನ ಒಳ್ಳೆ" ಯಂದು ಕರೆಯುತ್ತಾರೆ.
ಈ ಪೌರಾಣಿಕ ಕಥೆಗಳು ಏನೇ ಇರ್ಲಿ ಕುಂತಿ ಬೆಟ್ಟ ಅದರದೇ ಸೌಂದರ್ಯವನ್ನು ಮಡಿಲಿನಲ್ಲಿ ತುಂಬಿಕೊಂಡಿದೆ.

ಭೀಮನ ಒಳ್ಳೆ

ಒನಕೆ ಬೆಟ್ಟ
ಕುಂತಿ ಬೆಟ್ಟದ ಮೊಗ್ಗಲಿನಲ್ಲೇ ಒನಕೆ ಬೆಟ್ಟವಿದೆ, ತುಸು ಕಷ್ಟವಾದರೂ ನೋಡಬೇಕಾದ ಜಾಗ. ಬೆಟ್ಟದ ತುದಿಯಲ್ಲಿ ಒನಕೆ ಆಕಾರದ ಕಂಬವಿದೆ- ಅದಕ್ಕೆ ಒನಕೆ ಬೆಟ್ಟವೆಂಬ ಹೆಸರು.
ಪಾಳುಬಿದ್ದ ಗುಹೆಗಳು, ಸ್ವಲ್ಪ ಕಟಿಣವಾದ ಏರು ತಗ್ಗುಗಳು ಚಾರಣಿಕರನ್ನು ಹುರಿದುಮ್ಬಿಸುತದೆ.
ಒನಕೆ ಬೆಟ್ಟದ ತುದಿ 

Add caption



ಒನಕೆ ಬೆಟ್ಟದ ಶಿಕರದ  ತುದಿ ಮತ್ತು ಒನಕೆ ಆಕಾರದ ಕಲ್ಲುಕಂಬ.
ಕುಂತಿ ಬೆಟ್ಟದ ಚಾರಣ ತುಂಬಾ ಸುಲಬದ ಮತ್ತು ಮುದ ನೀಡುವ ಚಾರಣ.