Friday, March 4, 2011

ಆಚಾರ V/S ವಿಚಾರ

ಥಾಬಿಸುರ್ಲಾದ ಶಿವಾಲಯ (ಗೋವಾ ರಾಜ್ಯಕೆ ಸೇರಿದ್ದು )

 

ಶಿವರಾತ್ರಿಯ ಆಚರಣೆಗೆ ಅನೇಕ ಕಥೆಗಳಿವೆ ....
ಕಥೆ 1: ಸಮುದ್ರ ಮಥನದ ಸಮಯದಲಿ ಉಕ್ಕಿ ಬಂದ ವಿಷವನ್ನು ಕುಡಿದ ಶಿವ ಆ ರಾತ್ರಿ ಮಲಗಬಾರದೆಂದು ದೇವತೆಗಳು ರಾತ್ರಿಯಿಡಿ  ನಿದ್ರಾಹಾರ ಬಿಟ್ಟು  ಶಿವನನ್ನು ಆರಾದಿಸಿದರಂತೆ ... ಆ ರಾತ್ರಿಯೇ ಶಿವರಾತ್ರಿ 

ಕಥೆ 2: ವ್ಯಗ್ರವೆಂದು  ಬೇಡನನ್ನು ಅಟ್ಟಿಸಿಕೊಂಡು ಬರುತ್ತದೆ, ಬಿಲ್ವ ಮರವನ್ನೆರಿದ ಬೇಡ ರಾತ್ರಿಯಿಡಿ ತುಕಡಿಸಬಾರದೆಂದು ಬಿಲ್ವ ಎಲೆಗಳನ್ನು ಕೆಳಗಿದ್ದ ಶಿವ ಲಿಂಗದ ಮೇಲೆ ಹಾಕಿ ಶಿವಾನುಗ್ರಹ ಪಡೆಯುತ್ತಾನೆ. ನಿದ್ರಾಹಾರವನ್ನು ಬಿಟ್ಟು ಶಿವಾರದನೆ ಮಡಿದ ರಾತ್ರಿಯೇ  ಶಿವರಾತ್ರಿ ಎಂದು ......

ಕಥೆ 3: ಶಿವರಾತ್ರಿ ಫಾಲ್ಗುಣ ಮಾಸದ ಅಮವಾಸೆಯ ಹಿಂದಿನ ದಿನ ಆಚರಿಸಲಾಗುತ್ತದೆ. ಕಲಿಯುಗದ ಪ್ರಾರಂಬದ  ಹಿಂದಿನ ದಿನ ದೇವಾನು ದೇವತೆಗಳು ಕಲಿಯನ್ನು ತಾಳಲು ನಿದ್ರಾಹಾರವನ್ನು ಬಿಟ್ಟು ಶಿವಾರದನೆ ಮಾಡಿದಿದರು.
ಇಲ್ಲಿ ಅಮವಾಸೆ (ಕತ್ತಲೆಯ ಮತ್ತು  ಕಲಿಯ ಸಂಕೇತ ) ಕಲಿಯುಗದಲಿ ಬಾಳಲು ಶಿವಾನುಗ್ರಹ ಬೇಡಿದರಿಂದ ಆ ರಾತ್ರಿಯೇ ಶಿವರಾತ್ರಿ ಎಂದು .......
ಮೂರೂ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ವಿಷಯವೆಂದರೆ  ನಿದ್ರಾಹಾರವನ್ನು ಬಿಟ್ಟಿರುವುದು. ಅಂದರೆ ಉಪವಾಸ ಮತ್ತು ಜಾಗರಣೆ. ಅದನ್ನೇ ತಾನೇ ಎಲ್ಲರು ಮಾಡುತ್ತಿರುವುದು.
ಆಚರಣೆ ಒಂದುದಾದರೆ ಸಾಕೆ  ಅದರ ಸತ್ವ ವಿಚಾರಣೆ ಬೇಡವೇ?

ಶಿವರಾತ್ರಿಯ ತತ್ವ (ಸತ್ವದ) ವಿಚಾರವೇನು?

"ಏಕಚಿತ್ತತೆ" (ಒಂದೇ ಮನಸ್ಸಿನಿಂದ) ಅಥವಾ ಮೈಮರೆತು ಮಾಡುವ ಕೆಲಸ (Losing self). ಅದು ಶಿವರಾತ್ರಿಗೆ ಮೀಸಲಲ್ಲ ಯಾರು ಯಾವಾಗ ಬೇಕಾದರೂ ಅನುಭವಿಸಬಹುದು. ಉ.ದಾ:..
  • ಮೈಮರೆತು ಪುಸ್ತಕ ಓದುವಾಗಿನ ಅನುಭವ... 
  • ಮೈಮರೆತು ಆಟದಲ್ಲಿ ತಲ್ಲಿನವಾದಾಗ ...  ಅಮ್ಮನ ಊಟದ ಕರೆಗೆ ಏನಾಯಿತು 
  • ಚಿತ್ರ ಬಿಡಿಸುವ ಚಿತ್ರಕಾರನ ಏಕಚಿತ್ತತ..... ಅವನಿಗೆ ನಿದ್ರೆ ಅಡ್ಡಬರುವುದೇ
  •  ನಮಗೆ ಕುಶಿ ಕೊಡುವ ಕೆಲಸ  ಮಾಡುವಾಗ ಯಾವುದರ ಪರಿವೆ ನಮಗೆ...
ಮೈಮರೆತು ಮಾಡುವ ಕೆಲಸಕ್ಕೆ ಊಟ ನಿದ್ರೆಯ ಅಡಚಣೆ ಬಂದಿದೆಯೇ ಬಂದರು ನಾವು ಹೇಗೆಲ್ಲಾ ನಿಬಾಹಿಸಿ ಮಾಡಿದ ಕಳಸದ ಕುಶಿ ಸಂತೋಷವನ್ನು ಅನುಭವಿಸಿಲ್ಲ.... ಯೋಚಿಸಿ ನೋಡಿ.
ಆಚರಣೆಗಳು  ಕೇವಲ Rituals ಮಾತ್ರವಲ್ಲ ಅದರ  ಹಿಂದೆ ಅನೇಕ ವಿಚಾರಗಳಿರುತ್ತವೆ ಅದನ್ನು ಅರಿಯುವುದು ಮತ್ತು ಅನುಭವಿಸುವುದು ಅದರ ಉದ್ದೇಶ ಈ ನಿಟ್ಟಿನಲ್ಲಿ ನಿಮ್ಮ ಯಚನೆಗಳನ್ನು ಹರಿದು ಬಿಡಿ.
ಇಲ್ಲವಾದರೆ       
                        " ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು 
                          ಎತ್ತು ಗಾಣವ ಹೊತ್ತಿ ಸುತ್ತಿ ಬಂದಂತೆ " - ಸರ್ವಜ್ಞ -


Tuesday, February 22, 2011

ವಿಕಸನ



ಬೀಜದ ಸಾವು - ಮೊಳಕೆಯ ಅಂಕುರ
ಮೊಳಕೆಯ ಸಾವು -ಗಿಡದ ಅಂಕುರ
ಹೂವಿನ ಸಾವು - ಕಾಯಿಯ ಅಂಕುರ
ಒಂದರ ಅಂತ್ಯ ಮತ್ತೊಂದ ಅಂಕುರ
ಪರಿವರ್ತನೆಯೇ ಸತ್ಯ - ವಿಕಸನವೇ ನಿತ್ಯ
-ದೇವು-

Monday, February 21, 2011

ಕ್ರಿಯಾಶೀಲತೆ ಪ್ರಕೃತಿಯ ನಿಯಮ....


















ಕ್ರಿಯಾಶೀಲತೆ ಪ್ರಕೃತಿಯ ನಿಯಮ


ಮನೆಯ ಮುಂದೆ ಕಟ್ಟಡದ ಕೆಲಸ ನಡೆಯುತ್ತಿದೆ, ಅಲ್ಲಿ ಕೂಲಿಗಾಗಿ ದುಡಿಯಲು ಒಂದು ಸಂಸಾರ ಬಂದಿದೆ . ೫-೬ ಮಂದಿ ಮಕ್ಕಳು. ಕುಲಿಯವರ ಸ್ಥಿತಿ ಗೊತಲ್ಲ ಅದೇ ಬೀದಿ ಬದಿಯ ಸ್ತಾನ, ಸೌದೆ ಹುರಿಯ ಅಡುಗೆ. ಅದರಲಿ ಯಾವ ಮಕ್ಕಳು ಶಾಲೆಗೆ ಹೋದಂತೆ ಕಾಣಲ್ಲಿಲ, ಹೋಗಿದ್ದರು - ವರುಷ ಹೋಗಿರಬಹುದು. ಅವರನ್ನು ದಿನೇ ನೊಡುತ್ತಿದ ನಮಗೆ ವಯಸ್ಸಿನಲೇ ದುಡಿಯಲು ನಿಂತ ಅವರ ಬಾಲ್ಯ ಕಳದು ಹೋಗುತ್ತಿದೆಯಲ ಎಂದೆನಿಸುತ್ತಿತು.

ಒಂದು
ದಿನ ಮಕ್ಕಳ ಅಜ್ಜಿಯನ್ನು ವಿಚಾರಿಸಿದೆವು " ಯಾಕಮ್ಮ ಮಕ್ಕಳನ್ನು ಶಾಲೆಗೆ ಕಲಸೋದಲ್ವ? " ಅದಕ್ಕೆ ಅಜ್ಜಿ ಹೇಳಿದಳು.. ಏನ್ ಮಾಡೋದ್ ಹೇಳಿ... ಉರುನಾಗೆ ೧೦ ಎಕ್ಕರೆ ಜಮೀನ್ ಐತಿ, ಮಳೆಯಿಲ್ಲ ನೀರಿಲ್ಲ, ತಿನ್ನಕ ಒಂದು ಕಾಳು ಸಿಕ್ಕಲ್ಲ ನಮ್ಮದು ದೊಡ್ಡ ಸಂಸಾರ ನಡಿಬೇಕಲ್ಲ ಅದಕೆ ಬೆಂಗಳೂರಿಗೆ ಬಂಧ್ವಿ. ಅಲ್ಲಿಗೆ ಮಕ್ಕಳ ಶಾಲೆ ಕತೆ ಮುಗಿತು ಬಿಡೀ..... ಕೆಲಸ ಕಲೆತು ಕೊಂಡರೆ ಬದುಕೋತವೆ. ಪುಸ್ತಕ ಪೆನ್ಸಿಲು ಬಿಡೀ ಬಾಲ್ಯದ ಆಟಗಳು, ಅರಿಯದ ಮಕ್ಕಳಲ್ಲಿ ಒಂದು ದಿನವಾದರೂ ಅವರ ಜೀವನದಲ್ಲಿ ಬಣ್ಣ ತುಂಬುವ ಆಸೆ ನನ್ನಾಕೆಗೆ..... ಅವಳ ಪ್ರಯತ್ನವೇ ಇದು...




Sunday, February 20, 2011

ದಿಕ್ಕು ದೆಸೆ




ಅಗಣಿತ ತಾರಗಣಗಳ ನಡುವೆ ನಿನ್ನನೆ ನೆಚ್ಚಿಹೆ ನಾನು

ನನ್ನೀ ಜೇವನ ಸಮುದ್ರಯಾನಕೆ ಚಿರ ಧ್ರುವ ತಾರೆಯು ನೀನು.

ಇಲ್ಲದ ಸಲ್ಲದ ತೀರಗಲೆಡೆ ನಾ ತೊಳಲುತ ಬಳಲಿದರೇನು

ದಿಟ್ಟಿಯು ನಿನ್ನೊಳೆ ನೆಟ್ಟಿರೆ ಕಡೆಗೆ ಗುರಿಯನು ಸೇರೆನೆ ನಾನು.

ಚಂಚಳವಾಗಿಹ ತಾರಿಕೆಗಳಲಿ ನಿಶ್ಚಲನಂದರೆ ನೀನೆ

ಮಿಂಚಿ ಮುಳುಗುತಿಹ ನಶ್ವರದೆದೆಯಲಿ ಶಶ್ವತನೆಂದರೆ ನೀನೆ.

-ಕು.ವೆಂ.ಪು.